ಸಂಗೀತ ಸಾಮ್ರಾಜ್ಯದರಸುತನ ಕಿತ್ತೆಸೆದು ರಾಷ್ಟ್ರಸೇವೆಗೆ ನಿಂತ ಶ್ರೀ ಯಾದವ ಕೇಶವನ ಸಾನಿಧ್ಯ ಮಾಧವನ ಸಾಮೀಪ್ಯ ಸ್ವರ್ಣಮಂದಾರದಲಿ ಸುಮ ಸೌರಭ || ಪ || ಭಾರತಿಯ ಚರಣದಲಿ ಗಾಯನದ ನೈವೇದ್ಯ ಕೀರ್ತಿಮೋಹವ ಮರೆತ ಬಾಳಪಯಣ ರಾಷ್ಟ್ರವೇ ಶ್ರುತಿಲಯವು ಜೀವನವೆ ಸಂಗೀತ ತ್ಯಾಗಮಯ ಸಂಸ್ಕೃತಿಯ ಭೃಂಗಗಾನ || 1 || ಪೂರ್ವಸೂರಿಗಳೆಲ್ಲ ಸಾರಿ ತೋರಿದ ದಾರಿ ಕೃತಿರೂಪವನು ಪಡೆದ ಸಂಘಕಾರ್ಯ ಸ್ಪರ್ಷಮಣಿ ಗುಣಪಡೆದ ಚುಂಬಕದ ಸೆಳೆತದಲಿ ಪ್ರತಿಮನದಿ ಟಿಸಿಲೊಡೆದ ಧ್ಯೇಯವಾದ || 2 || ಭಾಸ್ಕರನ ಬಿಸುಪಿನಲಿ ಚಂದ್ರಮನ ಶೀತಲತೆ […]