ಖಿನ್ನತೆಯ ಕಳೆದಳಿಸಿ

ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]

Read More

ಸುರಕ್ಷೆಯ ರಕ್ಷೆಯ ಕಟ್ಟುತ ನಾವು

ಸುರಕ್ಷೆಯ ರಕ್ಷೆಯ ಕಟ್ಟುತ ನಾವು ಮುಂದಡಿಯಿಟ್ಟು ಸಾಗೋಣ ವೇದದ ನಾಡಲಿ ಭೇದವ ತೋರದೆ ಭ್ರಾತೃತ್ವದ ಸೆಲೆ ಬೆಳೆಸೋಣ || ಪ || ದಿವ್ಯ ಪರಂಪರೆ ಗತವೈಭವವನು ನೆನಪಿಸೊ ಪುಷ್ಪವ ಧರಿಸೋಣ ಮೇಲುಕೀಳುಗಳ ಕಳೆಯನು ಕೀಳುತ ಮಾನವತೆಯ ಮಧು ಸವಿಯೋಣ || 1 || ಭಾಷಾಪ್ರಾಂತದ ನಡುವಿನ ಮುನಿಸಿಗೆ ಇಂದಿಗೆ ಮಂಗಳ ಹಾಡೋಣ ಸೋದರತ್ವದ ಕಂಪನು ಬೀರುತ ನಾಡಿನ ಏಳ್ಗೆಗೆ ಶ್ರಮಿಸೋಣ || 2 || ಹೆಜ್ಜೆಹೆಜ್ಜೆಗೂ ಹೃದಯವ ಬೆಸೆಯುತ ರಾಷ್ಟ್ರದ ತೇರನ್ನೆಳೆಯೋಣ ಮಾತೃಮಂದಿರದ ರಕ್ಷಣೆ ಕಾರ್ಯಕೆ ಎಲ್ಲೆ […]

Read More

ಗ್ರಾಮದ ಕಡೆಗೆ ಸಾಗೋಣ

ಗ್ರಾಮದ ಕಡೆಗೆ ಸಾಗೋಣ ಗ್ರಾಮ ವಿಕಾಸ ಗೈಯೋಣ ರಾಮ ರಾಜ್ಯವ ರಚಿಸೋಣ ಸಮರಸ ಭಾರತ ಕಟ್ಟೋಣ || ಪ || ಉಣ್ಣುವುದಕ್ಕೆ ಅನ್ನವನ್ನಿತ್ತ ಮಣ್ಣ ಸೇವೆ ದಿನ ದಿನ ಗೈಯುತ್ತ ನೊರೆ ನೊರೆ ಹಾಲಿನ ಅಮೃತ ವಿತ್ತ ನಲ್ಮೆಯ ಆಕಳ ಮೈದಡವುತ್ತಾ ಅಂಬಾ ಎನ್ನುವ ಆ ಧ್ವನಿಗೆ……… ದೇವರು ಬರುವನು ಈ ಭೂಮಿಗೆ || 1 || ಮನ ಮನೆ ಮುಂದಿನ ಅಂಗಳದಿಂದ ಮೂಡುತಿದೆ ರಂಗೋಲಿ ಚಂದ ಊರೆಜಮಾನರ ಹಿರಿನುಡಿಯಿಂದ ಕೂಡುತಿದೆ ಜನಮನ ಸಂಬಂಧ ಕಾಯಕದಲ್ಲಿ ಆನಂದ………. […]

Read More