ಪಾಂಚಜನ್ಯದ ಕರೆಗೆ ಕರಗಿತು ದ್ವಾಪರದ ಆ ಕುರುಕುಲ ಹರಿಯು ಉರಿಸಿದ ಧೈರ್ಯ ದೀಪ್ತಿಗೆ ಬೆಳಗಿ ಧರ್ಮದ ದೇಗುಲ || ಪ || ಅವನ ಕೆಲಸಕೆ ಮತ್ತೆ ಹೊರಟಿದೆ. ಭರತ ಖಂಡ ಮನುಕುಲ ಮಾತೃ ವ್ಯಾಕುಲ ಕಳೆಯೆ ಕಲೆತಿದೆ ಕಲಿಯ ಕಲಿಗಳ ಸಂಕುಲ || 1 || ಬೆರಳು ನಲಿಯಲು ಉಲಿವ ಕೊಳಲಲು ಸ್ವಾಭಿಮಾನದ ಸರಿಗಮ ಏರುಇಳಿತದ ಸಪ್ತ ಸ್ವರದಲಿ ಸಾಮರಸ್ಯದ ಸಂಗಮ || 2 || ಪಣವ ಆನಕ ಶಂಖ ಗೋಮುಖ ರಣದ ಭೇರಿಯ ವಾದನ ಸ್ಫೂರ್ತಿ […]