ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ || ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು || 1 || ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ || 2 || ಧ್ರುವ […]
ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]