ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ; ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ || ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ; ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 || […]