ನವಭಾರತವನು ಕಟ್ಟಲು ಬನ್ನಿ

ನವಭಾರತವನು ಕಟ್ಟಲು ಬನ್ನಿ ನವದಿಗಂತವನು ಮುಟ್ಟಲು ಬನ್ನಿ ಅರಿಗಳ ಪಡೆಯನು ಮೆಟ್ಟಲು ಬನ್ನಿ ದ್ರೋಹಿಗಳನು ಹೊರಗಟ್ಟಲು ಬನ್ನಿ || ಪ || ತಾಯ್ನೆಲದಿತಿಹಾಸದ ಗರ್ಭದಲಿ ಹುದುಗಿದೆ ಸ್ಫೂರ್ತಿಯ ಹೊಂಬೆಳಕು ಜಗವನೆ ಜಯಿಸಿದ ಸಾಹಸವೀರರ ಶೌರ್ಯಪರಾಕ್ರಮಯುತ ಬದುಕು || 1 || ನಾಡಿನ ಐಕ್ಯ ಸಮಗ್ರತೆಯು ಭೇದದಿ ಛೇದಿತಗೊಳದಿರಲಿ ಹಿಂದುತ್ವದ ಬಂಧುತ್ವದ ಮಂತ್ರವು ಎಲ್ಲೆಡೆ ಮಾರ್ದನಿಗೊಳುತಿರಲಿ || 2 || ಹೊಂಚನು ಹಾಕಿಹ ವಂಚಕರಿಪುಗಳ ಸಂಚುಗಳೆಲ್ಲವನೆದುರಿಸಲು ಮಿಂಚಿನ ವೇಗದಿ ಮುನ್ನಡೆಯೋಣ ನಾಡಿನ ಗಡಿಗಳ ರಕ್ಷಿಸಲು || 3 ||

Read More

ಸುತ್ತಮುತ್ತಲು ಅಂಧಕಾರ

ಸುತ್ತಮುತ್ತಲು ಅಂಧಕಾರ ಉರಿಯುತಿತ್ತು ಹಣತೆಯೊಂದು ಬೆಳಕು ಹೊಮ್ಮಿತು ತಮವು ಅಳಿಯಿತು ಪುಳಕಗೊಂಡನು ಹಿಂದು ಹಿಂದು || ಪ || ಬರದ ಬೇಗೆಗೆ ಭುವಿಯ ಬೆಂದಿರೆ ಚಿಮ್ಮುತಿತ್ತು ಚಿಲುಮೆಯೊಂದು ದಾಹ ನೀಗಿತು ಧಾರೆ ಹರಿಯಿತು ಆಯಿತದುವೇ ಶಕ್ತಿಸಿಂಧು || 1 || ದೈತ್ಯ ಶಕ್ತಿಯ ಚಂಡಮಾರುತ ಬೀಸುತಿತ್ತು ಭರದೊಳಂದು ತತ್ತರಿಸದೆಯೆ ಎತ್ತರಿಸಿ ತಲೆ ಸಸಿಯು ಹೆಮ್ಮರವಾಯಿತಿಂದು || 2 || ದೈನ್ಯದಾಸ್ಯದ ವಿಕಟಹಾಸ್ಯಕೆ ನಡುಗುತಿತ್ತು ದೇಶವಂದು ಸ್ವಾಭಿಮಾನದ ಐಕ್ಯಬಲದಿಂ ಎದ್ದು ನಿಂತಿದೆ ರಾಷ್ಟ್ರವಿಂದು || 3 || ಘನ […]

Read More