ಕೇಶವನ ಕಲ್ಪನೆಯನು ಮಾಧವನ ಮಾರ್ಗವನು ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ || ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 || ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 || ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು […]
ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ || ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 || ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ ಸಂಘ ಮುರಿವ ತಂತ್ರಗಳಿಗೆ ಹಿಡಿದ […]