ಕ್ರೋಧನದ ದಶಮಿಯಿದು ಎಂದಿನಂತಲ್ಲ

ಕ್ರೋಧನದ ದಶಮಿಯಿದು ಎಂದಿನಂತಲ್ಲ ಸಂಭ್ರಮದ ಪರ್ವವಿದು ಪಾಲ್ಗೊಳ್ಳಿರೆಲ್ಲ ದಿಗ್ವಿಜಯಗೈಯಲಿದು ನೀಡುತಿದೆ ಸ್ಫೂರ್ತಿ ಮುನ್ನುಗ್ಗಿ ಸಾಧಿಸಲು ಘನಧ್ಯೇಯ ಪೂರ್ತಿ || ಪ || ಶೂನ್ಯದೊಳು ಸೃಷ್ಟಿಯನು ಗೈದ ಮಾಂತ್ರಿಕನಾರು ? ಮಸಣದೊಳು ನಂದನವ ನಿರ್ಮಿಸಿದ ಕಲಿ ಯಾರು ? ಜನಮನದಿ ನಾಡೊಲವ ಬಿತ್ತಿದನು ಕೇಶವನು ಅವನತಿಯ ಸುಳಿಯಿಂದ ಎತ್ತಿದನು ದೇಶವನು || 1 || ಗಾಢಾಂಧಕಾರದಲಿ ಮುಳುಗಿರಲು ಯುವಜನತೆ ಭರವಸೆಯ ಬೆಳಕನ್ನು ಬೀರಿಹುದು ಈ ಹಣತೆ ಧ್ಯೇಯದುಜ್ವಲ ಪ್ರಭೆಯ ಮನಮನದಿ ಪಸರಿಸುತ ದಿವ್ಯಸಂಘದ ಜ್ಯೋತಿ ಉರಿಯುತಿದೆ ಅನವರತ || […]

Read More