ಕೇಳದೊ ! ಗಿರಿಗಹ್ವರದಿಂದೇಳುತ ಗರ್ಜಿಸುತಿರುವ ಸಮೀರ ಭಾರತಮಾತೆಯ ಕಾವಲುಪ್ರಹರಿಯ ಪ್ರಲಯಂಕರ ಹೂಂಕಾರ || ಪ || ಚೇತನಚಿಲುಮೆಯ ಶತಶತ ಧಾರೆಯ ರುಂದ್ರ ಪ್ರವಾಹವೆ ಹರಿದು ವಿಘ್ನ ವಿರೋಧವ ತೇಲಿಸಿ ಮುಳುಗಿಸಿ ಕೊಳೆ ತೊಳೆಯುತ ಭೋರ್ಗರೆದು ನಾಡಿನ ನರನಾಡಿಗಳೊಳು ನಡೆದಿದೆ ನವ ವಿಪ್ಲವ ಸಂಚಾರ || 1 || ಕರಕರದಲಿ ಮಿಂಚಲಿ ಹೊರನೆಗೆಯಲಿ ಕಾಪಿನ ಖಡ್ಗ ಕಠಾರಿ ರಕ್ಷಿತವಾಗಲಿ ಶುಭಕೃತಿ ಸಂಸ್ಕೃತಿ ಅರಿದನುಜರ ಶಿರ ಹಾರಿ ಶಿಲೆ ಶಿಲೆ ಸಿಡಿದಿದೊ ಬಿರುಗಣ್ ಬಿಡಲಿದೆ ನರಸಿಂಹನ ಅವತಾರ || 2 […]