ಆ ಹಿಂದು ಮಹೋದಧಿಯೆದೆಯಾಳದ ಒಳಗೆ ಅಪಮಾನದ ಜ್ವಾಲಾಮುಖಿ ಧಗಧಗಿಸುತಿದೆ ಸಾಗರದೊಳಗೇರಿಳಿಯುವ ಹೆದ್ದೆರೆಗಳಲಿ ಅಲೆಯಲೆಯೊಳಗೂ ತುಂಬಿಹುದಾಕ್ರಂದನವು || ಪ || ಗಂಗಾಧರೆಯು ಪ್ರಶ್ನೆಯನೆಸೆಯುತಲಿಹುದು ಸಗರನ ಸುತರನು ಮೀರಿಸಿ ಮೃತವಾಯಿತೆ ಧರ್ಮದ ಕರ್ಮದ ನೆಲೆಮನೆ ಭಾರತವಿಂದು ? ಸಿಂಧೂಧಾರೆಯು ಬಿಸುಸುಯ್ಯುತಲಿಹುದು ತನ್ನನು ಭಂಗಿಸಿದವರಜ್ಞಾನಕೆ ನೊಂದು || 1 || ಜನನಿಯ ಶೋಕವ ಪರಿಹರಿಸದೆ ಬದುಕಿದ ಪುತ್ರರ ಬಾಳಿಗೆ ಶತಶಾಪಗಳಿರಲೆಂದು ಸುಖ ಸವಿಭೋಗದ ಮೋಹದಿ ನಿದ್ರಿಸುತಿಹ ಜನರಾಯುಷ್ಯವು ಸಾರ್ಥಕರಹಿತವದೆಂದು ಶಪಿಸುತಲಿದೆ ಭೂಗಗನಳಿಂದು || 2 || ಗತ ವಿಭವಂಗಳೊಳಭಿಮಾನವ ತಳೆದು ಭವ್ಯ […]