ಜನಸ್ವಾತಂತ್ರ್ಯದ ಸೂರ್ಯೋದಯದಲಿ

ಜನಸ್ವಾತಂತ್ರ್ಯದ ಸೂರ್ಯೋದಯದಲಿ ಸುಸ್ವಾಗತ ಜನಮನ ದೊರೆಗೆ ಸುವಿಚಾರದ ಮಧುವೆರೆಯುತ ಬಂದಿಹ ಶ್ರೀ ಮಧುಕರ ದೇವರಸರಿಗೆ || ಪ || ಸೆರೆಮನೆಯಿಂದಲೆ ಸೂತ್ರವ ಆಡಿಸಿ ಎರೆದಿರಿ ಸ್ಫೂರ್ತಿಯ ಯುವಜನಕೆ ದಾಸ್ಯದ ದುಃಖವ ತೊಲಗಿಸಿದಾತನೆ ಸ್ವಾಗತವಿದೊ ಕರ್ನಾಟಕಕೆ || 1 || ತೆಂಕಣ ಅಡವಿಯ ಘೀಳಿಡುವಾನೆಯ ಸೊಂಡಿಲ ಕಹಳೆಯ ಮೊಳಗಿನಲಿ ಸಂತರ ಶರಣರ ದಾಸವರೇಣ್ಯರ ಬೋಧನೆ ಕೀರ್ತನೆ ವಚನದಲಿ || 2 || ತುಂಗಾಭದ್ರೆಯ ಕೃಷ್ಣಾ ಕಪಿಲೆಯ ಕಾವೇರಿಯ ಕಲರವದೊಳಗೆ ಕನ್ನಡ ಜನದಾತ್ಮೀಯತೆ ಸೂಸುವ ಶ್ರೀಗಂಧದ ಸೌರಭದೊಳಗೆ || 3 […]

Read More