ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ

ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ ಧನ್ಯತೆಯ ಮೂಲವದು ಹಿಂದುಜನಕೆ | ದೈನ್ಯದುಃಖ ಹತಾಶೆ ಸಂಕಟದ ಸಮಯದೊಳು ಧೈರ್ಯವನು ತುಂಬಿಹುದು ನೊಂದಮನಕೆ || ಪ || ಜಗದ ಹೃದಯವ ಗೆದ್ದು ಮೆರೆಯುತಿಹ ಹಿಮರಾಜ ತಲೆಎತ್ತಿ ನಿಂದಿಹನು ಎತ್ತರದಲಿ | ವಜ್ರಮುಕುಟ ಹಿಮಾದ್ರಿ ಪ್ರಲಯರುದ್ರಾಲಯವು ಭದ್ರಸೀಮೆಯು ನಮಗೆ ಉತ್ತರದಲಿ || 1 || ಸಗರಕುಲಜನ ಛಲಕೆ ಒಲಿದ ಸುರನದಿ ಗಂಗೆ ನಾಕದಮೃತವನ್ನು ಉಣಿಸುತಿಹಳು | ಬರದಿ ಬೆಂದಿಹ ನೆಲಕೆ ಜಲಧಾರೆ ಹರಿಸುತಲಿ ಭುವಿಯ ಬಾಯಾರಿಕೆಯ ತಣಿಸುತಿಹಳು || 2 || […]

Read More