ಭಾರತಮಾತೆಯ ಮಕ್ಕಳು ನಾವು ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ ಮೊಳಗಲಿ ತಾಯಿಯ ಜಯಗಾನ || ಪ || ಒಂದೇ ನಾಡಲಿ ಜನಿಸಿದ ಬಳಿಕ ಮೇಲುಕೀಳು ಅಂತರವೇಕೆ ? ಏಳುಬೀಳುಗಳ ಬಾಳಹಾದಿಯಲಿ ಗುರಿಯನು ಮರೆಯದಿರಿ ಜೋಕೆ || 1 || ರಾಮಕೃಷ್ಣರ ಪಾವನಭೂಮಿ ದಿವ್ಯಶಕ್ತಿಯ ಭಂಡಾರ ಶಂಕರ ಬಸವರ ಬುದ್ಧ ವಿವೇಕರ ತತ್ವಾದರ್ಶದ ಆಧಾರ || 2 || ಜನನ ಮರಣಗಳ ನಡುವಿನ ಜೀವನ ಸಾಗಲಿ ಸನ್ಮಾರ್ಗದಿ ನೇರ ಸ್ವಾರ್ಥವ ದಹಿಸಿ ಕೀರ್ತಿಯ ಗಳಿಸಿ ಗೈಯುವ ನಾಡಿನ […]