ಧರ್ಮಾಧರ್ಮದ ಕರುರಣರಂಗದಿ ಕೇಶವ ತೋರು ವಿವೇಕ ಹೇ ಯುಗಸಾರಥಿ ಗೊಂದಲ ತೊಲಗಿಸು ಮನದೊಳು ಕವಿದಿದೆ ಅವಿವೇಕ || ಪ || ಸತ್ಪಾತ್ರರ ವಿನಯದಿ ಕರೆದಿತ್ತರೆ ದಾನವಿದೆನ್ನನುವ ಘನಕೀರ್ತಿ ಪಾತ್ರತೆ ಹೀನಗೆ ದಾನವನಿತ್ತರೆ ವ್ಯರ್ಥ-ಅಧರ್ಮ ಅನರ್ಥಗತಿ ನೀರಸ ತೃಣಕಣ ಕಸವನೆ ತಿಂದರು ಕ್ಷೀರಾಮೃತ ಈವುದು ಗೋವು ಕ್ಷೀರವ ಕುಡಿಕುಡಿದೂ ವಿಷಜ್ವಲೆಯ ಕಕ್ಕುವುದೈ ನಾಗರಹಾವು ಸಾರ್ಥಕದಾನದ ಸಾಧ್ಯತೆಯೊಂದೇ ಪಾತ್ರಾಪಾತ್ರ ವಿವೇಕ | ಹೇ ಯುಗ ಸಾರಥಿ || 1 || ಘೋರ ಕಪಟಿ ಆ ಘೋರಿಯ ಮೋಡಿಗೆ ಪೃಥ್ವಿರಾಜ ಕೈಸೆರೆಯಾದ […]