ತಾಯ್ನೆಲದ ಸದ್ಗುಣಗಳೇ ನನ್ನಲ್ಲಿ ಚಿಗುರಬನ್ನಿ ಆಂತರ್ಯದಾಳದಿಂದ ಉದ್ಗಮಿಸಿ ಜೀವ ತನ್ನಿ || ಪ || ಋಷಿ ದರ್ಶನವನು ಪಡೆದು ರಸಸ್ಪರ್ಶವನ್ನು ಕಡೆದು ಹೊಸ ಸೃಷ್ಟಿಗೊಪ್ಪುವಂತೆ ನನ್ನಲ್ಲಿ ಚಿಗುರ ಬನ್ನಿ || 1 || ಶ್ರೀರಾಮಕೃಷ್ಣರಿಂದ ಬಸವಣ್ಣ ಬುದ್ಧರಿಂದ ಇತಿಹಾಸದೊಳಗಿನಿಂದ ನನ್ನಲ್ಲಿ ಚಿಗುರ ಬನ್ನಿ || 2 || ಗುರುಭಕ್ತಿ ಎನಗೆ ಬರಲಿ ಸತ್ಯದೊಳು ಶ್ರದ್ಧೆಯಿರಲಿ ಸದ್ವಿಚಾರಗಳ ಸೆಲೆಯೇ ನನ್ನಲ್ಲಿ ಚಿಗುರ ಬನ್ನಿ || 3 || ನುಡಿತಪ್ಪದಂತೆ ನಡೆವ ಅಡಿ ತಪ್ಪದಂತೆ ಬೆಳೆವ ಸಿರಿವಂತ ಚಿಂತನೆಗಳೇ ನನ್ನಲ್ಲಿ […]