ಪುಣ್ಯಭೂಮಿಯಲಿ ಧ್ಯೇಯದ ಗುಡಿಯು ಗುಡಿಯಲಿ ಅರಳಿವೆ ಅಸಂಖ್ಯ ಸುಮವು ನಡೆದಿದೆ ರಾಷ್ಟ್ರದ ಅರ್ಚನೆಯು || ಪ || ಈಶನ ಕಾರ್ಯಕೆ ಜನಿಸಿದ ಕಾಯ ತುಂಬಿದೆ ಸೋಲರಿಯದ ಬಲ ಧೈರ್ಯ ಧಮನಿ ಧಮನಿಯಲಿ ಹರಿದಿದೆ ಶೌರ್ಯ ನಾಡ ರಕ್ಷಣೆಗೆ ಅನುದಿನವು || 1 || ಜಗ ತಲೆಬಾಗುವ ಶೀಲದ ನಡತೆ ಜನಮನ ಬೆಳಗುವ ಜ್ಞಾನದ ಹಣತೆ ಸಂಚಯ ನವನೇತೃತ್ವದ ಕ್ಷಮತೆ ಅಮಿತೋತ್ಸಾಹದಿ ಕ್ಷಣಕ್ಷಣವು || 2 || ಅಂಜದೆ ಸವಾಲುಗಳ ಸ್ವೀಕರಿಸಿ ಗೆಲ್ಲುವ ಛಲ […]