ಭರತಭೂಮಿಯ ಭಾಗ್ಯ ಉದಿಸಿದೆ ಏಳು ಮೇಲಕೆ ತರುಣನೆ ಭರದಿ ಸೇರಲಿ ಕೋಟಿ ಕರಗಳು ತರಲು ಶುಭಪರಿವರ್ತನೆ || ಪ || ಗರ್ಜಿಸುವುದನು ಮರೆತು ಸಿಂಹವದೇಕೆ ನರಿಗಳ ನೆಚ್ಚಿದೆ? ಸಜ್ಜನರ ನಿಷ್ಕ್ರಿಯತೆ ಕಾರಣ ದುರ್ಜನರ ಬಲ ಹೆಚ್ಚಿದೆ! ಆವ ದೈವವು ಕಾವುದೆನ್ನುತ ಬಾಗಿ ಕಂಗಳ ಮುಚ್ಚಿದೆ? ದೇವದುರ್ಲಭ ಸಂಘಟನೆಯಿದೆ ಸಾಗು ಬೆದರದೆ ಬೆಚ್ಚದೆ! || 1 || ಸೌಮ್ಯ ಸಂಸ್ಕೃತಿ ಸುಧೆಗೆ ಪೂತನಿ ವಿಷವನಿಕ್ಕುವ ಸಂಚಿದೆ ಸಾಮ್ಯವಾದದ ಮಾಯೆ ಜಿಂಕೆಯು ನಾಡನೊಡೆಯಲು ಹೊಂಚಿದೆ ಶಸ್ತ್ರಶಾಸ್ತ್ರದೊಳಾರು ನಿನಗೆಣೆ ನುಗ್ಗು ಸ್ಫೂರ್ತಿಯ […]