ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]

Read More