ಭಾರತದೇಕತೆ ಏಳಿಗೆಗಾಗಿ ದೃಢಸಂಕಲ್ಪವ ತೊಟ್ಟಿಹೆವು ಭೇದವ ಮರೆತು ಐಕ್ಯದಿ ಬೆರೆತು ಹೊಸನಾಡೊಂದನು ಕಟ್ಟುವೆವು || ಪ || ತೆಂಕಣ ಜಲಧಿಯ ಅಲೆಗಳ ಮೊರೆತ ಉಕ್ಕಿಸಿದೆ ನವ ಉತ್ಸಾಹ ಉತ್ತರದಳಲಿಗೆ ಉತ್ತರ ನೀಡಲು ಕಿತ್ತೊಗೆಯಿರಿ ಭಯ ಸಂದೇಹ || 1 || ಗಿರಿನದಿಗಳು ವನಸಿರಿಯಾಭರಣ ಪ್ರಕೃತಿಯು ನೀಡಿದ ವರದಾನ ನಾಡಿನ ಗೌರವ ರಕ್ಷಣೆಗಾಗಿ ಅರ್ಪಿಸಿ ತನುಮನಧನ ಪ್ರಾಣ || 2 || ಕಳಚಿರಿ ಉಗ್ರರ ಗೋಮುಖವ್ಯಾಘ್ರರ ಭೀಕರ ದ್ರೋಹದ ಮುಖವಾಡ ಮೊಳಗಲಿ ಹಿಂದುತ್ವದ ಜಯಘೋಷ ಚದುರಲಿ ಭೀತಿಯ ಕಾರ್ಮೋಡ […]