ನೋಡುವ ಬನ್ನಿರಿ ಬಂಧುಗಳೆಲ್ಲ, ಹಿಂದುಸ್ಥಾನದ ಸಾಹಸವ ಬಲಿದಾನದ ಈ ಭೂಮಿಯ ಕಣದಿ, ಧರಿಸುವ ನೊಸಲಿಗೆ ತಿಲಕವನು ವಂದೇ ಮಾತರಂ – ವಂದೇ ಮಾತರಂ ವಂದೇ ಮಾತರಂ – ವಂದೇ ಮಾತರಂ || ಪ || ಉತ್ತರ ದಿಸೆಯೊಳು ರಕ್ಷಣೆ ಗೈಯುವ, ಪರ್ವತ ರಾಜ ಹಿಮಾಲಯ ಭಾರತ ಮಾತೆಯ ಪಾದವ ತೊಳೆಯುತ, ಇಹುದದು ಸಾಗರ ಸಾಮ್ರಾಜ್ಯ ಗಂಗಾ ಯಮುನೆಯ ಸುಂದರ ತಟವು, ಪವಿತ್ರವೆನಿಸಿಹ ಸಂಗಮವು ಗ್ರಾಮ ಗ್ರಾಮದಿ ಪ್ರಾಂತ್ಯ ಪ್ರಾಂತ್ಯದಿ, ಹರಡಿಹ ಅಸಂಖ್ಯ ದೇಗುಲವು ನೋಡಿರಿ ನಮ್ಮಿ ‘ಅಖಂಡಭಾರತ’, […]
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ || ಪ || ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ || 1 || ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು ಮನ […]