ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ ಬಾಳಿನಲಿ ಬೆಳದಿಂಗಳೆನಿಸಬೇಕು ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ ಬಂಧು ಭಾವದೊಳವರ ಬೆಸೆಯಬೇಕು || ಪ || ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ ಬಧಿರತನದುರುಳಿಂದ ಬೇರ್ಪಡಿಸಬೇಕು ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 || ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ ಭರವಸೆಯ ಬೀಜವನು ಬಿತ್ತಬೇಕು ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ ಭಾರತದ ಬೇರುಗಳ ಬೆಳೆಸಬೇಕು || 2 || ಬವರದಲಿ ಬಲಿದಾನವಾಂತವರ ಬಯಕೆಯೊಲು ಭವ್ಯ ಭಾರತವನ್ನು ಬಲಿಯಬೇಕು ಭೂಮಾತೆಯಣುಗರಲಿ ಭೂಮಿ […]