ಯುದ್ಧಭೂಮಿ ಕರೆದಿದೆ ನಿದ್ದೆ ತೊರೆದು ಎದ್ದು ಬಾ ಘೋರ ಸಂಗ್ರಾಮಕೆ ಸಿದ್ಧನಾಗಿ ಮುಂದೆ ಬಾ ಭರತಮಾತೆಗೆ ಜೈ ಭರತಮಾತೆಗೆ ಶಿರವಬಾಗಿ ಮುನ್ನಡೆ ವಿಶ್ವನಾಥಗೆ || ಪ || ರಣಕಹಳೆಯ ಸಿಂಹನಾದ ಮೊಳಗುತಿರುವುದು ಸಮರಭೇರಿ ಗಡಿಯುದ್ಧಕು ಗುಡುಗುತಿರುವುದು ನಡುಗುತಿಹರು ಅರಿಗಳು ಚದುರುತಿಹುರು ರಿಪುಗಳು ಶತ್ರುಕುಲದ ಹುಟ್ಟನಳಿಸೆ ಮುನ್ನುಗ್ಗು ಬಾ || 1 || ಸಾಕು ಮಾಡು ಬರಿಯ ಶಾಂತಿಮಂತ್ರ ಬೋಧನೆ ಅರಿಯದೇನು ಭಾರತಾಂಬೆಯೊಡಲ ವೇದನೆ ? ಗೈದು ವೀರಘೋಷಣೆ ಅಸ್ತ್ರಶಸ್ತ್ರ ಚಾಲನೆ ದ್ರೋಹಿಗಳಿಗೆ ತಕ್ಕ ಪಾಠವನ್ನು ಕಲಿಸು ಬಾ […]
ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]
ದುಃಖಿತ ಜನತೆಯ ಕಂಬನಿಯೊರೆಸಿ ಮುಚ್ಚಿದಹಂಕಾರದ ಕದ ಸರಿಸಿ ಸಾಗುವ ಬಾ ವರ ವೈಭವದೆಡೆಗೆ, ಸಾಧನೆಯಾ ಉತ್ತುಂಗದ ಕಡೆಗೆ ಉನ್ನತಿಯಾ ಗುರಿ ಸೇರುವವರೆಗೆ || ಪ || ಎತ್ತರ ನಿಂತಿಹ ಧವಳ ಹಿಮಾಚಲ ಧೈರ್ಯವ ತುಂಬಿಸಲಿ ಉನ್ನತ ಭಗವೆಯ ಮಂಗಳಲಾಸ್ಯವ ಜಲಧಿಯು ಬಿಂಬಿಸಲಿ ಜೀವಜಲಂಗಳ ಮಂಜುಳಧಾರೆಯು ಸ್ಫೂರ್ತಿಯ ಉಕ್ಕಿಸಲಿ ಉಜ್ವಲ ಚರಿತೆಯ ಪ್ರಜ್ವಲ ದೀಪವು ದಾರಿಯ ತೋರಿಸಲಿ || 1 || ದೈನ್ಯ ನಿರಾಶೆಯ ಕಾಲವು ಕಳೆಯಿತು ಇದು ಗೆಲುವಿನ ಯುಗವು ಶೌರ್ಯ ಪರಾಕ್ರಮ ಹೊಮ್ಮಲಿ ಇಂದು ತಲೆಬಾಗಲಿ […]
ಹೃದಯ ಸಿಂಹಾಸನದ ಮೇಲೇರು ಬಾ ದೇವಿ – ಓ ಭಾರತದ ಸ್ವಾತಂತ್ರ್ಯದಧಿ ದೇವಿ ! ದಾಸ್ಯ ಶೃಂಖಲೆಯೆಲ್ಲ ನಿನ್ನಂಘ್ರಿ ಸ್ಪರ್ಶಕ್ಕೆ ಸಿಡಿದೊಡೆದು ಬೀಳುವುದು ಸೀಳು ಹೋಳಾಗಿ || ಪ || ಅಡಿಯಿಡಲು ಎಡೆದೊರೆಯದೆಂದು ಬೆದರುವೆಯೇಕೆ ಎಡೆಗೊಡರು ದ್ರೋಹಿಗಳು ಎಂಬ ಭಯವೇನು ? ಅಡಿಗೊಂದು ತಲೆ ಬುರುಡೆ ಬಲಿನೀಡಿ ನಡೆಸುವೆವು ಭಯವೇಕೆ ಬಾರಮ್ಮ ಬೆದರೆದೆಯೆ ನೀನು || 1 || ಪಟ್ಟಿಹೆವು ಕಡು ಕಷ್ಟ ಪಟ್ಟ ಕಟ್ಟಲು ನಿನಗೆ ಬೇಗನೀ ಬಲಿಪೀಠದಾ ಮೆಟ್ಟಿಲೇರಿ ಬಿಡು ದಿಟ್ಟತನದಿಂದಡಿಯ ಮುಂದಿಟ್ಟು ದುಷ್ಟರನು […]