ಅಬ್ಬರದ ಜೀವನದ ಕಾರ್ಮೋಡ ಕವಿದಿರಲು ವಿಸ್ಮೃತಿಯು ಹೆಗಲೇರಿ ನಾಳೆಗಳು ನಲುಗಿರಲು ಮಬ್ಬಡರಿ ಬರಿದಾದ ಕುರುಡು ಮನಗಳಲೀಗ ಅಸ್ಮಿತೆಯ ಜಾಗರಣ ನಡೆಯಬೇಕು || ಪ || ಸ್ವಂತ ಜೀವನ ಮರೆತು ನಿತ್ಯ ಶುದ್ಧತೆ ಬಯಸಿ ವಿಶ್ವಗುರು ಭಾರತಕೆ ಸತತ ಕಾಯವ ಸವೆಸಿ ಸತ್ಯದರಿವಿಗೆ ತಪಿಸಿ ಸಂತ ಜೀವನ ನಡೆಸಿ ಸ್ವಾರ್ಥವರಿಯದ ಬದುಕ ಬಾಳಬೇಕು || 1 || ಸ್ವಸ್ಥ ದೇಶಕೆ ಇಲ್ಲಿ ಸ್ವಸ್ಥ ವ್ಯಕ್ತಿಯ ಸೃಷ್ಟಿ ವೇದ ಯೋಗದ ಮಾರ್ಗ ಕಲೆಯ ಸಮ್ಮಾನ ವಿಜ್ಞಾನ ಭೂಸೇವೆ ಲೋಕಹಿತದೆಡೆ ದೃಷ್ಟಿ […]