ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು || ಪ || ಗಣಪತಿಯ ಪದತಲಕೆ ಶರಣು ಶರಣೆಂದು ನವದುರ್ಗೆ ಜಗಕೆಲ್ಲ ಶುಭವ ತರಲೆಂದು ಈಶ ನಿಮಗತ್ಯಧಿಕ ಫಲವ ಕೊಡಲೆಂದು ವಿಜಯ ದಶಮಿಯು ನಮಗೆ ಜಯವ ತರಲೆಂದು || 1 || ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು (ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು) ಧನಕನಕ ಗೋಭಾಗ್ಯ ನಿಮಗೊದಗಲೆಂದು ಸಾವಯವದಿಂದನ್ನ ನಮಗೊದಗಲೆಂದು ಹೂ ಕೋಲ ದರುಶನದಿ ಶುಭವು ನಿಮಗೆಂದು || 2 || […]