ನವಜೀವನದಧ್ಯಾಯವ ಬರೆಯಲು ಹರಿದೇಳಿರಿ ಜಡತೆಯ ಪೊರೆಯ ತಾಯ್ನೆಲದಭಿಮಾನದ ದಾವಾಗ್ನಿಗೆ ದೂಡಿರಿ ಅಪಮಾನದ ಹೊರೆಯ || ಪ || ಪರರಾಕ್ರಮಣದ ಕರಿನೆರಳೆರಗಿದೆ ದೇಶದ ಭವಿತವ್ಯದ ಮೇಲೆ ವಿಧ್ವಂಸದ ಹೆಡೆ ತೆರೆದಾಡುತಲಿದೆ ಗೃಹ ಗುಡಿಗೋಪುರಗಳ ಮೇಲೆ ಬಲವಿಲ್ಲದವರಿಗೆಲ್ಲಿಯ ಬೆಲೆಯು? ಕಾಳ್ಗಿಚ್ಚಾಗಲಿ ಜನ ಹೃದಯ || 1 || ಕೃತಿ ಕಾಣದ ಒಣಭಕ್ತಿಯನಣಗಿಸಿ ವ್ರತಧಾರಿಗಳಾಗಿರಿ ಸುತರೆ ಹಿಮಗಿರಿ ದ್ವಾರದಿ ಸಾಗರತೀರದಿ ನಡೆಯಲಿ ಉರಿಗಣ್ಣಿನ ಪಹರೆ ನಂದಲು ಬಿಡದಿರಿ ಹಿಂದುಸ್ಥಾನದ ಚಿರಸ್ವಾತಂತ್ರ್ಯದ ಉರಿಯ || 2 || ನೀತಿಗೆ ಸಂಧಾನದ ಸವಿಮಾತಿಗೆ ಸಂಸ್ಕೃತಿ […]